ಸೂರ್ಯನ ಕಿರಣಗಳಿಂದ ಚಲಿಸುವ ಸ್ಕೂಟರ್

ಸೂರ್ಯನ ಕಿರಣಗಳಿಂದ ಚಲಿಸುವ ಸ್ಕೂಟರ್

ಬೀದಿ ಬೀದಿಯಲ್ಲಿ ವಾಹನಗಳ ಸಂಚಾರದಿಂದಾಗಿ ಮಲಿನ ಹೊಗೆಯಿಂದಾಗಿ ಮೂಗು ಮುಚ್ಚಿಕೊಂಡು ತಿರುಗುವ ಸ್ಥಿತಿ ನಿರ್ಮಾಣವಾಗಿದೆ. ಪರಿಸರಮಾಲಿನ್ಯದಿಂದಾಗಿ ಜನ ನಿಧಾನವಿಷದಿಂದ ತತ್ತರಿಸುತ್ತಿರುವುದು ಸರ್‍ವಸಾಮಾನ್ಯ. ಅದರಲ್ಲೂ ಪೆಟ್ರೋಲ್‌ ಬಳಸುವುದೆಂದರೆ ದುಬಾರಿ ಬೆಲೆ ಬೇರೆ. ಇಂಥದನ್ನೆಲ್ಲ ಹೋಗಲಾಡಿಸಲೆಂದು ವಿದ್ಯುತ್ ಚಾಲಿತ ತಂತ್ರಗಳನ್ನು ತಯಾರಿಸಿದರೆ ವಿದ್ಯುತ್‌ಗೂ ಬರ. ಪದೆಪದೆ ಕೈಕೊಡುವ ವಿದ್ಯುತ್‌ನಿಂದಾಗಿ ಈ ವಿದ್ಯುತ್‌ಚಾಲಿತ ಯಂತ್ರಗಳು ಯಶಸ್ವಿಯಾಗುತ್ತಿಲ್ಲ. ಆದರೀಗ ವಿದ್ಯುತ್ ಇಲ್ಲದ ದುಬಾರಿ ಬೆಲೆಯೂ ಇಲ್ಲದ ಕೇವಲ ಸೂರ್ಯನ ಕಿರಣದಿಂದಲೇ ಗಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುವ ಸೌರಶಕ್ತಿಯ ಸ್ಕೂಟರ್‌ಗಳು ಮುಂದೆ ಭಾರತೀಯರಿಗೆ ವರದಾನವಾಗಲಿವೆ.

ಲಂಡನ್ನಿನ ಸೌತ್‌ಬ್ಯಾಂಕ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿ ಪಾಲ್‌ಶಾಪಲ್ ಅವರು ಸೌರಶಕ್ತಿಯಿಂದ ಓಡುವ ಸ್ಕೂಟರನ್ನು ತಯಾರಿಸಿದ್ದಾರೆ. ಇಟಲಿಯ ‘ಪಿಯಾಜಿಯೊ’ ಕಂಪನಿಯ ಸಹಯೋಗದಿಂದ ಈ ಸ್ಕೂಟರ್ ತಯಾರಿಸಿರುವ ಶಾಪಲ್ ೧೯೯೬ ನೇ ಸಾಲಿನ “ಪ್ರುಡೆನ್ಸಿಯಲ್ ಬಿಸಿನೆಸ್ ಇನ್ ಪ್ರಾಕ್ಟೀಸ್” ಪ್ರಶಸ್ತಿಯನ್ನು ಸಹ ಗಳಿಸಿದ್ದಾರೆ. ಕೈಗಾರಿಕೆಗಳು ಹಾಗೂ ವಿನ್ಯಾಸಕಾರರ ಸಲಹಾ ಕೇಂದ್ರದಲ್ಲಿ ಉದ್ಯೋಗ ಬಯಸಿ ಬರುವ ಪಧವೀಧರರಾಗಿ ಲಂಡನ್ನಿನಲ್ಲಿ ಏರ್ಪಡಿಸಲಾಗಿದ್ದ ಎಂಜನಿಯರಿಂಗ್ ಪ್ರಾಡಕ್ಟ್-ಡಿಜೈನ್ ಶೋ ನಲ್ಲಿ ಈ ಸೌರಶಕ್ತಿಯ ಸ್ಕೂಟರನ್ನು ಪ್ರದರ್ಶನಕ್ಕಿಡಲಾಗಿತ್ತು.

ಇದಕ್ಕೂ ಮೊದಲು ಶಾಪಲ್ ಸೌರಶಕ್ತಿಯ ಕುಕ್ಕರ್ ಅನ್ನು ವಿನ್ಯಾಸಗೊಳಿಸಿದ್ದರು. ಸ್ಪೇನ್ ಕಂಪನಿಯೊಂದರಲ್ಲಿ ಒಂದು ವರ್ಷಗಳ ಕಾಲ ಈ ಸ್ಕೂಟರ್ ನಿರ್ಮಾಣದ ಕುರಿತು (ಯೋಜನೆ) ಪೂರ್ವಸಿದ್ಧತೆ ಮತ್ತು ಪೂರ್ವ ಕೆಲಸಗಳನ್ನು ಮಾಡುತ್ತಿದ್ದರು. ಸ್ಕೂಟರ್‌ನಲ್ಲಿ ೧೨ ವೊಲ್ಟೇಜ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದ್ದು ಸೂರ್ಯನ ಕಿರಣಗಳಿಂದ ಈ ಬ್ಯಾಟರಿಯ ಶಾಖವನ್ನು ಸಂಗ್ರಹಿಸಿ ಸ್ಕೂಟರ್ ಚಾಲು ಮಾಡಿದಾಗ ಬೇಕಿದ್ದಷ್ಟು ಬಿಡುಗಡೆ ಮಾಡುತ್ತ ಹೋಗುತ್ತದೆ ಮತ್ತು ಗಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ವಾಹನಗಳಿಂದ ಹೊರಬರುವ ಮಲೀನ ಹೊಗೆ ಪರಿಸರವನ್ನು ನಾಶಮಾಡುತ್ತಿರುವ ಈ ಸಂದರ್ಭದಲ್ಲಿ ಪರಿಸರವಾದಿಗಳಿಗೆ ಹಾಗೂ ಪೆಟ್ರೋಲ್ ಬೆಲೆ ಏರಿಕೆಯಿಂದ ತತ್ತರಿಸಿದ ಮಧ್ಯಮ ವರ್ಗದ ಜನಕ್ಕೆ ಇದೊಂದು ವಿಶೇಷವಾದ ಸಂತಸ ತರುವ ಸುದ್ದಿಯಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತು ಕೇಳದಂತೆಲ್ಲ ಮಾತನಾಡಿದೊಡೇನೊಂಟಿಯಾದೊಡೇನು ?
Next post ಇದು ಯಾವ ಜನ್ಮದ ಮೈತ್ರಿಯೋ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys